Gruhalakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಮಹತ್ವದ ಮಾಹಿತಿ, ಜನರ ಗೊಂದಲಕ್ಕೆ ಸರ್ಕಾರದಿಂದ ಸ್ಪಷ್ಟನೆ

Telegram Group Join Now
WhatsApp Group Join Now

ಇತ್ತೀಚೆಗಷ್ಟೇ ರಾಜ್ಯಾದ್ಯಂತ ಮೃತಪಟ್ಟಿರುವ ಸುಮಾರು 2.5 ಲಕ್ಷಕ್ಕೂ ಹೆಚ್ಚು ಮಹಿಳೆಯರ ಖಾತೆಗಳಿಗೆ ಗೃಹಲಕ್ಷ್ಮಿ ಯೋಜನೆಯ (Gruhalakshmi Scheme) ಹಣ ನಿಯಮಿತವಾಗಿ ಜಮೆಯಾಗುತ್ತಿರುವ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಇದರ ಬೆನ್ನಲ್ಲೇ ಎಚ್ಚೆತ್ತಿರುವ ಆಡಳಿತ ಮಂಡಳಿಯು, ಮೃತಪಟ್ಟವರ ಹೆಸರಿಗೆ ಹಣ ಹೋಗುವುದನ್ನು ತಕ್ಷಣದಿಂದಲೇ ನಿರ್ಬಂಧಿಸಿದೆ. ಆದರೆ, ಆ ಕುಟುಂಬಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದು, ಮನೆಯ ಮುಂದಿನ ಅರ್ಹ ಮಹಿಳೆಗೆ ಈ ಯೋಜನೆಯನ್ನು ವರ್ಗಾಯಿಸಿಕೊಳ್ಳಲು ಅಧಿಕೃತ ಅವಕಾಶ ಕಲ್ಪಿಸಿದೆ.

ಅಂದರೆ, ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದ ಅತ್ತೆ ಅಥವಾ ತಾಯಿ ಮರಣ ಹೊಂದಿದರೆ, ಆ ಕುಟುಂಬದ ಸೊಸೆ ಅಥವಾ ಮಗಳು ಹೊಸ ಯಜಮಾನಿಯಾಗಿ ನೋಂದಣಿ ಮಾಡಿಕೊಂಡು ಪ್ರತಿ ತಿಂಗಳು ₹2,000 ಹಣವನ್ನು ಪಡೆಯಬಹುದು.

ಗೊಂದಲ ಬೇಡ, ಸರ್ಕಾರದ ಸ್ಪಷ್ಟನೆ ಇಲ್ಲಿದೆ: ಶಿವಮೊಗ್ಗ ತಾಲೂಕು ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ಮಧು ಹೆಚ್.ಸಿ. ಅವರು ಈ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

ಮರಣ ಹೊಂದಿದವರ ಜೀವಿತಾವಧಿ ಪ್ರಮಾಣಪತ್ರ (Life Certificate) ನೀಡುವ ವಿಚಾರದಲ್ಲಿ ಸಾರ್ವಜನಿಕರು ಸದ್ಯಕ್ಕೆ ಗೊಂದಲಕ್ಕೀಡಾಗುವುದು ಬೇಡ, ಸರ್ಕಾರದ ಮುಂದಿನ ಆದೇಶದವರೆಗೆ ಕಾಯುವಂತೆ ತಿಳಿಸಿದ್ದಾರೆ.

ಜೊತೆಗೆ, ಐಟಿ/ಜಿಎಸ್‌ಟಿ (IT/GST) ಪಾವತಿಸುವವರನ್ನು ಹಾಗೂ ಎನ್‌ಪಿಸಿಐ (NPCI) ಮ್ಯಾಪಿಂಗ್ ಆಗದ ಖಾತೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೇಕಾಗುವ ಪ್ರಮುಖ ದಾಖಲೆಗಳು:

ಕುಟುಂಬದ ಮತ್ತೊಬ್ಬ ಮಹಿಳೆ ಗೃಹಲಕ್ಷ್ಮಿ ಯೋಜನೆಗೆ ಮರು-ನೋಂದಣಿ ಮಾಡಿಕೊಳ್ಳಲು ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿವೆ:

  1. ಮರಣ ಪ್ರಮಾಣಪತ್ರ: ಮೃತಪಟ್ಟಿರುವ ಮೂಲ ಫಲಾನುಭವಿಯ (ಹಳೆಯ ಯಜಮಾನಿಯ) ಅಧಿಕೃತ ಡೆತ್ ಸರ್ಟಿಫಿಕೇಟ್ (Death Certificate).
  2. ಆಧಾರ್ ಕಾರ್ಡ್: ಹೊಸದಾಗಿ ‘ಮನೆಯೊಡತಿ’ ಆಗಲಿರುವ ಮಹಿಳೆಯ (ಉದಾ: ಸೊಸೆ/ಮಗಳು) ಆಧಾರ್ ಕಾರ್ಡ್.
  3. ತಿದ್ದುಪಡಿಯಾದ ರೇಷನ್ ಕಾರ್ಡ್: ಹೊಸ ಮಹಿಳೆಯ ಹೆಸರೇ ‘ಕುಟುಂಬದ ಮುಖ್ಯಸ್ಥೆ’ ಎಂದು ನಮೂದಾಗಿರುವ ಬಿಪಿಎಲ್ (BPL) ಅಥವಾ ಎಪಿಎಲ್ (APL) ಪಡಿತರ ಚೀಟಿ.
  4. ಬ್ಯಾಂಕ್ ಪಾಸ್‌ಬುಕ್: ಹೊಸ ಅರ್ಜಿದಾರರ ಹೆಸರಿನಲ್ಲಿರುವ ಹಾಗೂ ಆಧಾರ್-NPCI ಲಿಂಕ್ ಆಗಿರುವ ಬ್ಯಾಂಕ್ ಖಾತೆಯ ವಿವರ.

ಅರ್ಜಿ ಸಲ್ಲಿಸುವ ಸಂಪೂರ್ಣ ಪ್ರಕ್ರಿಯೆ (ಹಂತ-ಹಂತವಾಗಿ):

  • ಹಂತ 1: (ರೇಷನ್ ಕಾರ್ಡ್ ತಿದ್ದುಪಡಿ ಕಡ್ಡಾಯ): ನೀವು ನೇರವಾಗಿ ಗೃಹಲಕ್ಷ್ಮಿಗೆ ಅರ್ಜಿ ಹಾಕುವಂತಿಲ್ಲ. ಮೊದಲಿಗೆ ನಿಮ್ಮ ಹತ್ತಿರದ ಆಹಾರ ಇಲಾಖೆ ಕಚೇರಿ ಅಥವಾ ಸೇವಾ ಕೇಂದ್ರಗಳಿಗೆ (ಬೆಂಗಳೂರು ಒನ್/ಕರ್ನಾಟಕ ಒನ್) ಭೇಟಿ ನೀಡಿ, ರೇಷನ್ ಕಾರ್ಡ್‌ ಅಪ್‌ಡೇಟ್ ಮಾಡಿಸಬೇಕು. ಪಡಿತರ ಚೀಟಿಯಿಂದ ಮೃತ ಯಜಮಾನಿಯ ಹೆಸರನ್ನು ಅಳಿಸಿ, ಹೊಸ ಮಹಿಳೆಯ ಹೆಸರನ್ನು ‘ಕುಟುಂಬದ ಮುಖ್ಯಸ್ಥೆ’ ಎಂದು ಬದಲಾಯಿಸಬೇಕು.
  • ಹಂತ 2: (ಗೃಹಲಕ್ಷ್ಮಿಗೆ ಮರು-ನೋಂದಣಿ): ರೇಷನ್ ಕಾರ್ಡ್‌ನಲ್ಲಿ ‘ಕುಟುಂಬದ ಮುಖ್ಯಸ್ಥೆ’ಯ ಹೆಸರು ಅಧಿಕೃತವಾಗಿ ಬದಲಾದ ಬಳಿಕ, ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಗೃಹಲಕ್ಷ್ಮಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು.

“ಗೃಹಲಕ್ಷ್ಮಿ ಯೋಜನೆಯ ನಿಯಮದ ಪ್ರಕಾರ, ರೇಷನ್ ಕಾರ್ಡ್‌ನಲ್ಲಿ ಯಾರು ‘ಮನೆಯ ಯಜಮಾನಿ’ ಎಂದು ನಮೂದಾಗಿರುತ್ತಾರೋ, ಅವರ ಬ್ಯಾಂಕ್ ಖಾತೆಗೆ ಮಾತ್ರ ಹಣ ವರ್ಗಾವಣೆಯಾಗುತ್ತದೆ. ಹೀಗಾಗಿ, ಮೂಲ ಫಲಾನುಭವಿ ತೀರಿಕೊಂಡ ತಕ್ಷಣ ವಿಳಂಬ ಮಾಡದೆ, ಮೊದಲು ರೇಷನ್ ಕಾರ್ಡ್‌ನಲ್ಲಿ ಮನೆಯೊಡತಿಯ ಹೆಸರನ್ನು ಬದಲಾಯಿಸಿಕೊಳ್ಳುವುದು ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ.”

ಉಚಿತ ಹೊಲಿಗೆ ಯಂತ್ರ ಯೋಜನೆ 2025; ಅರ್ಹರಿಂದ ಆನ್‌ಲೈನ್‌ ಅರ್ಜಿ ಆಹ್ವಾನ

Telegram Group Join Now
WhatsApp Group Join Now
Written By Verified Author
Manjunath Pujari - Founder & Editor-in-Chief of KannadaSiri.in

Manjunath Pujari

Founder & Editor-in-Chief, Hosamahiti.com

10+ Years Exp
Belagavi Working Place
6,000+ Articles

ಮಂಜುನಾಥ ಪೂಜಾರಿ, ಮುದ್ರಣ ಮತ್ತು ಡಿಜಿಟಲ್ ಮಾಧ್ಯಮದಲ್ಲಿ 10 ಕ್ಕೂ ಹೆಚ್ಚು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವ. ವಿವಿಧ ವೆಬ್‌ಸೈಟ್‌ಗಳಲ್ಲಿ ಸರ್ಕಾರಿ ಯೋಜನೆಗಳು, ಉದ್ಯೋಗ, ಶಿಕ್ಷಣ, ವಿದ್ಯಾರ್ಥಿವೇತನ, ತಂತ್ರಜ್ಞಾನ, ಆಟೋಮೊಬೈಲ್, ಕೃಷಿ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಕೀರ್ಣ ಮಾಹಿತಿಗಳನ್ನು ಕನ್ನಡ ಓದುಗರಿಗೆ ಸರಳವಾಗಿ ಅರ್ಥವಾಗುವಂತೆ ಸುದ್ದಿಯನ್ನು ಬರೆಯುತ್ತಾರೆ.

Leave a Comment